ಅಣಕು ಗೀತೆ ... ಮಿಂಚಾಗಿ ನೀನು ಬರಲು
( ಜಯಂತ್ ಕಾಯ್ಕಿಣಿಯವರ ಕ್ಷಮೆ ಕೋರಿ.. )
.
ಬಾಗಿಲು ದಢಾರೆನ್ನಲು, ನಿಂತಲ್ಲಿಯೆ ಮಳೆಗಾಲ
ಬೆಚ್ಚನೆ ಹೊದಿಕೆ ಇರಲು, ಕೂತಲ್ಲಿಯೆ ಚಳಿಗಾಲ
ಪವರ್ ಕಟ್ ಶುರುವಾಗಲು, ಮತ್ತದೆ ಬೇಸಿಗೆಕಾಲ
ಇನ್ನೆಲ್ಲಿದೆ ನನ್ನ ನಿದ್ದೆಗೆ ಉಳಿಗಾಲ????
.
ಬಾಗಿಲು ದಢಾರೆನ್ನಲು, ನಿಂತಲ್ಲಿಯೆ ಮಳೆಗಾಲ..
.
ನಾ Bescom Power ಗೆ ಚಂದಾದಾರನು
Fan ಗಾಳಿ ಬೀಸದೆ ನಾ ಮಲಗಲಾರೆನು
ನಾ ಸೊಳ್ಳೆಯ ಹಸಿವೆಗೆ ಆಹಾರವಾದೆನು
ಸೊಳ್ಳೆಯ ಕಂಡ ಕ್ಷಣದಲೆ ಹೆದರಿ ಹೋದೆನು
ಕ್ಷಮಿಸು ನೀ ಕಿರಿಕಿರಿ, ಕೊಲ್ಲಲೇ ನಿನ್ನನು
ಹೇಳಿ ಕೇಳಿ ಮೊದಲೆ ಚೂರು ಪಾಪಿ ನೀನು.
.
ಬಾಗಿಲು ದಢಾರೆನ್ನಲು, ನಿಂತಲ್ಲಿಯೆ ಮಳೆಗಾಲ..
.
ನನ್ನ ಮನಕೆ ನೋವು ಕೊಡುವ ನೀನು ಮೋಸಗಾರ
ಕನ್ನ ಕೊರೆದು ದೋಚಿ ಕೊಂಡ ರಕ್ತಕ್ಕೆ ನೀನೆ ಹೊಣೆಗಾರ
ನನ್ನದೀ ವೇದನೆ ಯಾರಿಗೂ ನಾ ಹೇಳೆನು
ಹೇಳಿ ಕೇಳಿ ಮೊದಲೆ ಚೂರು ಕಳ್ಳ ನೀನು.
.
ಬಾಗಿಲು ದಢಾರೆನ್ನಲು, ನಿಂತಲ್ಲಿಯೆ ಮಳೆಗಾಲ..